ನಾರಾವಿ ಪ್ರೌಢಶಾಲೆ ನಾರಾವಿ – (ಅನುದಾನಿತ) – ವಜ್ರ ಮಹೋತ್ಸವ ಉದ್ಘಾಟನಾ ಸಮಾರಂಭ. ದಿನಾಂಕ 28-11-2025 ನೇ ಶುಕ್ರವಾರದಂದು ನಾರಾವಿ ಪ್ರೌಢಶಾಲೆ (ಅನುದಾನಿತ), ನಾರಾವಿಯ ವಜ್ರ ಮಹೋತ್ಸವ ಆಚರಣೆಗೆ ಅದ್ದೂರಿ ಚಾಲನೆ ನೀಡಲಾಯಿತು. ಕಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿಗಳು ವಂ| ಸ್ವಾಮಿ| ಡಾ| ಪ್ರವೀಣ್ ಲಿಯೋ ಲಸ್ರಾದೊರವರು ಈ ಉದ್ಘಾಟನಾ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡು ವಜ್ರ ಮಹೋತ್ಸವದ ಲಾಂಛನವನ್ನು ಅನಾವರಣಗೊಳಿಸಿದರು. ಶ್ರೀ ರಕ್ಷಿತ್ ಶಿವರಾಂ ರವರು ದೀಪ ಬೆಳಗಿಸಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. […]
ನಾರಾವಿ ಪ್ರೌಢಶಾಲೆ, ನಾರಾವಿ – [ಅನುದಾನಿತ] – ಬೆಳ್ತಂಗಡಿ ತಾಲ್ಲೂಕು, ದ. ಕ. ಮಕ್ಕಳಲ್ಲಿ ಪೌಷ್ಟಿಕತೆಯನ್ನು ಹೆಚ್ಚಿಸಲು ಮತ್ತು ಅಪೌಷ್ಟಿಕತೆಯನ್ನು ಹೋಗಲಾಡಿಸಲು ಅಕ್ಷರ ದಾಸೋಹ, ಕ್ಷೀರ ಭಾಗ್ಯ ದ ಜೊತೆಯಲ್ಲಿ ಮೊಟ್ಟೆಯನ್ನು ನೀಡುತಿದ್ದು, 8ನೇ ತರಗತಿಗೆ ಮಾತ್ರವಲ್ಲದೆ, ಇದೀಗ 9ನೇ ಮತ್ತು 10ನೇ ತರಗತಿಗೂ ವಿಸ್ತರಿಸಲಾಗುತಿದ್ದು, ಪ್ರಸ್ತುತ ಶಿಕ್ಷಣಿಕ ವರ್ಷದಲ್ಲಿ ಪ್ರತೀ ವಿದ್ಯಾರ್ಥಿಗೆ ಒಟ್ಟಿಗೆ 80 ಬೇಯಿಸಿದ ಮೊಟ್ಟೆಗಳನ್ನು ನೀಡಲಾಗುತ್ತದೆ. ನಮ್ಮ ಎಲ್ಲಾ ಫಲಾನುಭವಿ ವಿದ್ಯಾರ್ಥಿಗಳಿಗೆ ಅದನ್ನು ಒದಗಿಸಲಾಗಿ, ನಾರಾವಿ ಪ್ರೌಢಶಾಲೆಯಲ್ಲಿ (ಅನುದಾನಿತ) 18-08-2023ರಂದು ಸಾಂಕೇತಿಕವಾಗಿ ಉದ್ಘಾಟಿಸಿ […]
ದಿನಾಂಕ: 15-07-2023 ನಾರಾವಿ ಪ್ರೌಢಶಾಲೆ (ಅನುದಾನಿತ), ನಾರಾವಿ ಇಲ್ಲಿ ಮಾದಕ ವಸ್ತುಗಳ ವ್ಯಸನಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ, ಪೋಲೀಸರೊಂದಿಗೆ ಸಂವಾದ ಮತ್ತು ಮಾಹಿತಿ ಕಾರ್ಯಕ್ರಮವನ್ನು ಜುಲೈ 15, 2023ರಂದು ಹಮ್ಮಿಕೊಳ್ಳಲಾಯಿತು. ವೇಣೂರು ಪೋಲಿಸ್ ಠಾಣಾಧಿಕಾರಿ ಶ್ರೀಮತಿ ಸೌಮ್ಯ. ಜೆ. ಯವರು ಮಾದಕ ದ್ರವ್ಯ ವ್ಯಸನ ಹಾಗೂ ಸೈಬರ್ ಕ್ರೈಮ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಿ, ವಿದ್ಯಾರ್ಥಿಗಳೊಂದಿಗೆ ಹಾಗೂ ಶಿಕ್ಷಕರೊಂದಿಗೆ ಮುಕ್ತವಾಗಿ ಸಂವಾದ ನಡೆಸಿದರು. ಶಾಲಾ ಸಂಚಾಲಕರು ರೆ. ಫಾ. ವಲೇರಿಯನ್ ಫೆರ್ನಾಂಡಿಸ್ ಹಾಗೂ ಶಾಲಾ […]
23-Sept-2022 ರಾಷ್ಟ್ರೀಯ ಪೋಷಣ್ ಅಭಿಯಾನ್ ಪ್ರಯುಕ್ತ ನಾರಾವಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿರುವ ಕೌಶಲ-ಅಭಿರುಚಿ-ಜಾಗೃತಿ ಯನ್ನು ಪ್ರೇರೇಪಿಸುವ ಸಲುವಾಗಿ ಬೆಂಕಿಯಿಲ್ಲದ ಅಡುಗೆ (ಸ್ಪರ್ಧೆ) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮುಂಚಿತವಾಗಿಯೇ ತಿಳಿಸಿರುವಂತೆ, ವಿದ್ಯಾರ್ಥಿಗಳು ಪಂಗಡದ ಹೆಸರನ್ನು ಮೊದಲೇ ನೋಂದಾಯಿಸಿಕೊಂಡು, ಕೊಟ್ಟಿರುವ ಸ್ಥಳಾವಕಾಶ ಮತ್ತು ಸಮಯಾವಕಾಶವನ್ನು ಬಳಸಿ, ತಾವೇ ತಂದಿರುವ ಆಹಾರ ವಸ್ತುಗಳನ್ನು ಸಂಯೋಜಿಸಿ, ಖಾದ್ಯ, ಪಾನೀಯಗಳನ್ನು ತಯಾರಿಸಿದರು. ವಿವಿಧ ಘಟಕಾಂಶಗಳನ್ನು ತುರಿದು, ಬೆರೆಸಿ, ರುಚಿಯನ್ನು ಪರಿಶೀಲಿಸಿ ಕೌಶಲ್ಯ ವನ್ನು ಮೆರೆದರು. ವೈವಿದ್ಯಮಯವಾಗಿ ರಚಿಸಿ, ರೂಪಿಸಿಕೊಂಡು, ತಾವೇ ಅದರ ಅಂದವನ್ನು ಮೊದಲು ಕಂಡು ಸಂಭ್ರಮಿಸಿದರು. […]