23-Sept-2022 ರಾಷ್ಟ್ರೀಯ ಪೋಷಣ್ ಅಭಿಯಾನ್ ಪ್ರಯುಕ್ತ ನಾರಾವಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿರುವ ಕೌಶಲ-ಅಭಿರುಚಿ-ಜಾಗೃತಿ ಯನ್ನು ಪ್ರೇರೇಪಿಸುವ ಸಲುವಾಗಿ ಬೆಂಕಿಯಿಲ್ಲದ ಅಡುಗೆ (ಸ್ಪರ್ಧೆ) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮುಂಚಿತವಾಗಿಯೇ ತಿಳಿಸಿರುವಂತೆ, ವಿದ್ಯಾರ್ಥಿಗಳು ಪಂಗಡದ ಹೆಸರನ್ನು ಮೊದಲೇ ನೋಂದಾಯಿಸಿಕೊಂಡು, ಕೊಟ್ಟಿರುವ ಸ್ಥಳಾವಕಾಶ ಮತ್ತು ಸಮಯಾವಕಾಶವನ್ನು ಬಳಸಿ, ತಾವೇ ತಂದಿರುವ ಆಹಾರ ವಸ್ತುಗಳನ್ನು ಸಂಯೋಜಿಸಿ, ಖಾದ್ಯ, ಪಾನೀಯಗಳನ್ನು ತಯಾರಿಸಿದರು. ವಿವಿಧ ಘಟಕಾಂಶಗಳನ್ನು ತುರಿದು, ಬೆರೆಸಿ, ರುಚಿಯನ್ನು ಪರಿಶೀಲಿಸಿ ಕೌಶಲ್ಯ ವನ್ನು ಮೆರೆದರು. ವೈವಿದ್ಯಮಯವಾಗಿ ರಚಿಸಿ, ರೂಪಿಸಿಕೊಂಡು, ತಾವೇ ಅದರ ಅಂದವನ್ನು ಮೊದಲು ಕಂಡು ಸಂಭ್ರಮಿಸಿದರು. […]
21-ಸೆಪ್ಟೆಂಬರ್-2022) ನಾರಾವಿ ಪ್ರೌಢಶಾಲೆ, ನಾರಾವಿ – ಮತ್ತು ಸಂತ ಪೌಲರ ಹಿರಿಯ ಪ್ರಾಥಮಿಕ ಶಾಲೆಯ ಜಂಟಿ ಆಶ್ರಯದಲ್ಲಿ ಪೋಷಣ್ ಅಭಿಯಾನ್ ಪ್ರಯುಕ್ತ, ಪೋಷಣ ಮಾಸಾಚರಣೆಯ ಅಂಗವಾಗಿ ಮಕ್ಕಳಿಂದ ತರಕಾರಿ ಮತ್ತು ಹಣ್ಣುಗಳ ಪ್ರದರ್ಶನಾ ಮೇಳ, ಆಹಾರ ಘಟಕಗಳ ಮಹತ್ವದ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿಯವರಾದ ಶ್ರೀಮತಿ ತಾರಕೇಸರಿ – ಇವರು ಮುಖ್ಯ ಅತಿಥಿಗಳಾಗಿ ಹಾಗೂ ಪ್ರೇರಕರಾಗಿ ನಮ್ಮ ಜೊತೆಗಿದ್ದರು. ಶಾಲಾ ಸಂಚಾಲಕರಾದ ವಂ. ಸೈಮನ್ ಡಿಸೋಜಾ ರವರು ಅಧ್ಯಕ್ಷತೆ […]